ಅರುಣ ನಂದಗಿರಿ ರಾಯಚೂರಿನಲ್ಲಿ ಇರುತ್ತಾರೆ. ನಾನು ಮಂತ್ರಾಲಯಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಇವರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿರುವೆ.
ಅರುಣ ಒಬ್ಬ ವ್ಯಂಗ್ಯಚಿತ್ರಕಾರರು ಹಲವಾರು ವರ್ಷಗಳಿಂದಲೂ ಹಾಸಿಗೆ ಹಿಡಿದು, ತಾಯಿಯ ಸಹಾಯದಿಂದಲೇ ತಮ್ಮ ಸ್ವಂತಿಕೆ ಬುದ್ದಿಯನ್ನು ಉಪಯೋಗಿಸಿ ವ್ಯಂಗ್ಯಚಿತ್ರಗಳನ್ನು ಬರೆಯುತ್ತಾರೆ. ತಮ್ಮ ಚಿತ್ರಗಳ ಮೂಲಕ ಎಲ್ಲರನ್ನೂ ನಗಿಸುವ ಅರುಣ, ಅವರ ಬೆಳಕು ಮಾತ್ರ ಕತ್ತಲು. ಹುಟ್ಟಿದಾಗಿನಿಂದ ಅಂಗವಿಕಲರಾಗಿರುವ ಅರುಣ ಅವರದು ಹಾಸ್ಯಮಯವಾದ ಬದುಕು. ಇಂತಹ ಅದ್ಭುತ ವ್ಯಕ್ತಿಯ ಕೆಲವು ಚಿತ್ರಗಳನ್ನು ಪರದೆಯ ಮೇಲೆ ಹಾಕಿರುವೆ. ನೀವು ಲೈಕು ಮಾಡಿದಷ್ಟು ಅರುಣ ಅವರಿಗೆ ಖುಶಿ ನೀಡುತ್ತೆ. ಚಿಕ್ಕ ವಿಡಿಯೋ ಇದೆ ನೋಡಿ.
-Venkatesh Inamdar




No comments:
Post a Comment